ಬಾಸೆಲ್ ಮಿಶನ್ ಮತ್ತು ಮಹಿಳೆಯರ ವಿದ್ಯಾಭ್ಯಾಸ ಭಾರತದಲ್ಲೆಡೆ ಇದ್ದಂತೆ ನಮ್ಮ ಜಿಲ್ಲೆಯಲ್ಲಿಯೂ ಜಾತಿ ವ್ಯವಸ್ಥೆ ಹಾಗೂ ಅನಕ್ಷರತೆ ಪ್ರಚಲಿತದಲ್ಲಿತ್ತು. ಜನಸಾಮಾನ್ಯರು ಮತ್ತು ಮಹಿಳೆಯರು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶೋಷಿತರಾಗಿದ್ದರು. ಸಮಾನತೆ ತರಬಲ್ಲ ಸಾಧನವಾದ ಶಿಕ್ಷಣದಿಂದ ಮಹಿಳೆಯರೂ ವಂಚಿತರಾಗಿದ್ದರು. ಬ್ರಿಟಿಷರು ಈ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸಿರಲಿಲ್ಲ. ಇಲ್ಲಿನ ಜನರು ವರ್ಣ ವ್ಯವಸ್ಥೆಯಲ್ಲಿರುವ ತಮ್ಮ ಕುಲ ಕಸುಬುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಕ್ಷರ ಜ್ಞಾನ ತರುವಂತಹ ಶಿಕ್ಷಣ ಕೇವಲ ಬ್ರಾಹ್ಮಣರ ಸೊತ್ತಾಗಿತ್ತು. ಇನ್ನುಳಿದ ಜಾತಿಗಳ ಕುಲಕಸಬುಗಳಿಗೆ ಅಕ್ಷರ ಜ್ಞಾನದ ಅವಶ್ಯಕತೆ ಇರಲಿಲ್ಲ. ಸ್ವಂತ ಭೂಮಿಯಿಲ್ಲದೆ ತಮ್ಮ ದೈನಂದಿನ ವೆಚ್ಚಗಳಿಗಾಗಿ ಮೇಲ್ವಾತಿಯವರನ್ನೇ ಅವಲಂಭಿಸಬೇಕಾಗಿತ್ತು. ಆದ್ದರಿಂದ ಈ ವರ್ಗದ ಜನರು ಶತಮಾನಗಳಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದರು.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/155/br ಶ್ರೀ ನಾರಾಯಣ ಗುರುಗಳ “ಒಂದೇ ಜಾತಿ ಒಂದೇ ದೇವರು” ಎಂಬ ತತ್ವ ಜಿಲ್ಲೆಯ ಬ್ರಾಹ್ಮಣೇತರ ಜಾತಿ, ಅದರಲ್ಲೂ ಹೆಚ್ಚಾಗಿ ಬಿಲ್ಲವರರನ್ನು ಪ್ರೇರೇಪಿಸಿದರೂ ಅವರಿಗಿಂತ ಹೀನಾಯವಾಗಿ ಬದುಕುತ್ತಿದ್ದ ಪಂಗಡಗಳನ್ನು ಯಾವುದೇ ರೀತಿಯಲ್ಲಿ ತಟ್ಟಲಿಲ್ಲವೆನ್ನುವುದು ವಿಪರ್ಯಾಸ ಸಂಗತಿ.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/155/br 1834ರಿಂದ ಬಂದ ಬಾಸೆಲ್ ಮಿಶನರಿಗಳು ಇಲ್ಲಿ ಕ್ರೈಸ್ತ ಮತ ಪ್ರಚಾರದಲ್ಲಿ ತೊಡಗಿದರು. ಅವರು ಇಲ್ಲಿನ ಶೈಕ್ಷಣಿಕ ನ್ಯೂನತೆಯನ್ನು ಗಮನಿಸಿದರು. ಕ್ರೈಸ್ತ ಮತ ಪ್ರಚಾರದ ಮೂಲ ಉದ್ದೇಶವಿಟ್ಟುಕೊಂಡೇ ಶಾಲೆ ಪ್ರಾರಂಭಿಸಿರುವುದು ಸ್ಪಷ್ಟ. ಆದರೆ ಸಾಮಾಜಿಕ ನ್ಯಾಯದ ಕಾಳಜಿ ಹೊಂದಿದ ಅವರ ಮನೋಭಾವವೇ ಇಂದು ಜಿಲ್ಲೆ ಶೈಕ್ಷಣಿಕವಾಗಿ ಇಷ್ಟೊಂದು ಮುಂದುವರಿಯಲು ಕಾರಣವಾಯಿತು.Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/155/br 1836ರಲ್ಲಿ ಸ್ಥಾಪನೆಯಾದ ಪ್ರಥಮ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ವರ್ಗದವರಿಗೂ ಮುಕ್ತ ಅವಕಾಶವಿತ್ತು. ಆದರೆ ಕೆಳವರ್ಗದವರು, ಹುಡುಗಿಯರು ಈ ಶಾಲೆಗಳಿಗೆ ಸೇರಲು ಮುಂದೆ ಬರುತ್ತಿರಲಿಲ್ಲ. 1842ರಿಂದ ಹೆಣ್ಮಕ್ಕಳಿಗೆ ಶಾಲೆPage:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/155/br ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 143
Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/155
Appearance